ಲೇಪಾಕ್ಷಿಯ ಸುಂದರ ದೇವಾಲಯವಿರುವುದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಲೇಪಾಕ್ಷಿ ಎಂಬ ಹಳ್ಳಿಯಲ್ಲಿ. ಬೆಂಗಳೂರಿನಿಂದ ಸುಮಾರು 120 Km. ದೂರದಲ್ಲಿದೆ. ಇಲ್ಲಿಗೆ ಬರಲು ಎರಡು ದಾರಿಗಳಿವೆ. ಬೆಂಗಳೂರಿನಿಂದ ಹಿಂದೂಪುರಕ್ಕೆ ಬಂದು ಬಲಕ್ಕೆ 15 Km. ಅಥವಾ ಬೆಂಗಳೂರು-ಹೈದರಾಬಾದ್ ಹೈವೆ (NH-7) ನಲ್ಲಿ ಕೊಡಿಕೊಂಡ ಚಕ್ ಪೋಸ್ಟ್ ನಿಂದ ಎಡಕ್ಕೆ ಸುಮಾರು 12 Km. ಕ್ರಮಿಸಿದರೆ ಲೇಪಾಕ್ಷಿ ತಲುಪಬಹುದು.
ದೇವಾಲಯದ ಮುಂದುಗಡೆ ವಾಹನ ನಿಲ್ಲಿಸಿ ಮುಂದೆ ನಡೆದಾಗ ಮೆಟ್ಟಲುಗಳು ಸಿಗುತ್ತವೆ ಮತ್ತು ಎದುರುಗಡೆ ಸುಂದರ ಉದ್ಯಾನ ಸ್ವಾಗತ ಬಯಸುತ್ತದೆ.

ಅಲ್ಲೇ ಕೈ ಕಾಲು ತೊಳೆದುಕೊಂಡು ಆಯಾಸ ಪರಿಹಾರ ಮಾಡಿಕೊಂಡು ಮುಂದೆ ಮುಖ್ಯಗೋಪುರವನ್ನು ಪ್ರವೇಶಿಸಿದರೆ ಲೇಪಾಕ್ಷಿಯ ಹೊರ ಆವರಣವನ್ನು ಸೇರುತ್ತೇವೆ.


ಇಲ್ಲಿ ಉತ್ಸವ ಸಮಯದಲ್ಲಿ ಜನರಿಗೆ ಕುಳಿತುಕೊಳ್ಳಲು, ವಿಶ್ರಮಿಸಲು ನಾಲ್ಕು ಸುತ್ತಲೂ ಕೆತ್ತನೆ ಸ್ಥಂಭಗಳಿಂದ ಕೂಡಿದ ಪೌಳಿ ಗಳಿವೆ.

ಈ ಆವರಣವನ್ನು ದಾಟಿ ಮುಂದೆ ಹೋದಾಗ ನಮಗೆ ಮುಖ್ಯ ಮಂಟಪ ಎದುರಾಗುತ್ತದೆ. ಇದರಲ್ಲಿ ಬಹಳ ಸುಂದರವಾದ ಕೆತ್ತನೆಗಳುಳ್ಳ ಶಿಲಾಸ್ಥಂಭ ಗಳಿವೆ.ಒಂದೊಂದು ಸ್ಥಂಭವೂ ವಿಭಿನ್ನವಾಗಿದ್ದು ಎಲ್ಲದರಲ್ಲೂ ಶಿವನ ನಾನಾ ರೂಪಗಳನ್ನು ಕೆತ್ತಲಾಗಿದೆ. ಒಂದು ಸ್ಥಂಭವಂತೂ ತೂಗಾಡುತ್ತಿದೆಯೇನೋ ಎಂಬಂತೆ ಕಾಣುತ್ತದೆ. ಅದರ ಅಡಿ ಭಾಗವು ನೆಲಕ್ಕೆ ತಗಲಿದೆ-ಇಲ್ಲ, ಎಂಬಂತಿದೆ. ಈ ದೇವಾಲಯವನ್ನು ವಿಜಯನಗರ ಶೈಲಿಯಲ್ಲಿ ನಿರ್ಮಿಸಿದ್ದಾರೆ.

ಈ ಆವರಣವನ್ನು ದಾಟಿ ಮುಂದೆ ಹೋದಾಗ ನಮಗೆ ಮುಖ್ಯ ಮಂಟಪ ಎದುರಾಗುತ್ತದೆ. ಇದರಲ್ಲಿ ಬಹಳ ಸುಂದರವಾದ ಕೆತ್ತನೆಗಳುಳ್ಳ ಶಿಲಾಸ್ಥಂಭ ಗಳಿವೆ.ಒಂದೊಂದು ಸ್ಥಂಭವೂ ವಿಭಿನ್ನವಾಗಿದ್ದು ಎಲ್ಲದರಲ್ಲೂ ಶಿವನ ನಾನಾ ರೂಪಗಳನ್ನು ಕೆತ್ತಲಾಗಿದೆ. ಒಂದು ಸ್ಥಂಭವಂತೂ ತೂಗಾಡುತ್ತಿದೆಯೇನೋ ಎಂಬಂತೆ ಕಾಣುತ್ತದೆ. ಅದರ ಅಡಿ ಭಾಗವು ನೆಲಕ್ಕೆ ತಗಲಿದೆ-ಇಲ್ಲ, ಎಂಬಂತಿದೆ. ಈ ದೇವಾಲಯವನ್ನು ವಿಜಯನಗರ ಶೈಲಿಯಲ್ಲಿ ನಿರ್ಮಿಸಿದ್ದಾರೆ.

ಇಲ್ಲಿಂದ ಪ್ರದಕ್ಷಿಣಾ ಪಥದಲ್ಲಿ ಬಂದರೆ ಮುಖ್ಯ ದೇವಾಲಯಕ್ಕೆ ತಾಗಿಕೊಂಡು ಒಂದು ಹೆಬ್ಬಂಡೆ ಇದೆ. ಅದರ ಮುಂಭಾಗದಲ್ಲಿ ಒಂದು ಗುಡಿ.

ಲೇಪಾಕ್ಷಿ ದೇವಾಲಯವನ್ನು ಕೂರ್ಮಾಕೃತಿಯ ಬಂಡೆಯ ಮೇಲೆ ಕಟ್ಟಿದ್ದಾರೆ. ಇಲ್ಲಿನ ಇತಿಹಾಸದ ಪ್ರಕಾರ ಲೇಪಾಕ್ಷಿಯನ್ನು 16 ನೆ ಶತಮಾನದಲ್ಲಿ ವಿಜಯನಗರ ಅರಸರ ಬೊಕ್ಕಸದ ಖಜಾಂಜಿಯಾಗಿದ್ದ ವಿರುಪಣ್ಣ ಎಂಬಾತನು ಕಟ್ಟಿಸಿದ್ದನು. ವಿಜಯನಗರ ಅರಸರು ಶತ್ರುಗಳ ಮೇಲೆ ದಂಡೆತ್ತಿ ಹೋಗಿರುವ ಸಮಯದಲ್ಲಿ ವಿರುಪಣ್ಣನು ಬೊಕ್ಕಸದ ಹಣವನ್ನು ವ್ಯಯಿಸಿ ದೇವಾಲಯವನ್ನು ಕಟ್ಟಿಸಿದ್ದನಂತೆ. ಇದರಿಂದ ಬೊಕ್ಕಸವು ಖಾಲಿ ಆಯಿತೆಂದು ಕುಪಿತರಾದ ಅರಸರು ಆತನ ಕಣ್ಣುಗಳನ್ನು ಕೀಳಿಸಲು ಆಜ್ಞಾಪಿಸಿದರಂತೆ, ಇದನ್ನು ತಿಳಿದ ವಿರುಪಣ್ಣನು ತಾನೇ ಸ್ವತಹ ತನ್ನಹಣೆಯನ್ನು ದೇವಾಲಯದ ಗೋಡೆಗೆ ಘಟ್ಟಿಸಿಕೊಂಡು ತನ್ನ ಕಣ್ಣುಗಳನ್ನು ಕಳೆದುಕೊಂಡನೆಂದು ಹೇಳುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಆತನು ತನ್ನ ಕಣ್ಣುಗಳನ್ನು ಕಳೆದುಕೊಂಡ ಗೋಡೆಯ ಮೇಲೆ ರಕ್ತದ ಕಲೆಯು ಈಗಲೂ ಇದೆಯಂತೆ.

ಲೇಪಾಕ್ಷಿ ದೇವಾಲಯವನ್ನು ಕೂರ್ಮಾಕೃತಿಯ ಬಂಡೆಯ ಮೇಲೆ ಕಟ್ಟಿದ್ದಾರೆ. ಇಲ್ಲಿನ ಇತಿಹಾಸದ ಪ್ರಕಾರ ಲೇಪಾಕ್ಷಿಯನ್ನು 16 ನೆ ಶತಮಾನದಲ್ಲಿ ವಿಜಯನಗರ ಅರಸರ ಬೊಕ್ಕಸದ ಖಜಾಂಜಿಯಾಗಿದ್ದ ವಿರುಪಣ್ಣ ಎಂಬಾತನು ಕಟ್ಟಿಸಿದ್ದನು. ವಿಜಯನಗರ ಅರಸರು ಶತ್ರುಗಳ ಮೇಲೆ ದಂಡೆತ್ತಿ ಹೋಗಿರುವ ಸಮಯದಲ್ಲಿ ವಿರುಪಣ್ಣನು ಬೊಕ್ಕಸದ ಹಣವನ್ನು ವ್ಯಯಿಸಿ ದೇವಾಲಯವನ್ನು ಕಟ್ಟಿಸಿದ್ದನಂತೆ. ಇದರಿಂದ ಬೊಕ್ಕಸವು ಖಾಲಿ ಆಯಿತೆಂದು ಕುಪಿತರಾದ ಅರಸರು ಆತನ ಕಣ್ಣುಗಳನ್ನು ಕೀಳಿಸಲು ಆಜ್ಞಾಪಿಸಿದರಂತೆ, ಇದನ್ನು ತಿಳಿದ ವಿರುಪಣ್ಣನು ತಾನೇ ಸ್ವತಹ ತನ್ನಹಣೆಯನ್ನು ದೇವಾಲಯದ ಗೋಡೆಗೆ ಘಟ್ಟಿಸಿಕೊಂಡು ತನ್ನ ಕಣ್ಣುಗಳನ್ನು ಕಳೆದುಕೊಂಡನೆಂದು ಹೇಳುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಆತನು ತನ್ನ ಕಣ್ಣುಗಳನ್ನು ಕಳೆದುಕೊಂಡ ಗೋಡೆಯ ಮೇಲೆ ರಕ್ತದ ಕಲೆಯು ಈಗಲೂ ಇದೆಯಂತೆ.
ಹಾಗಾಗಿ ಕಣ್ಣುಗಳನ್ನು ಕಳೆದುಕೊಂಡ ಈ ದೇವಾಲಯಕ್ಕೆ ಲೇಪಾಕ್ಷಿ ಎಂತ ಹೆಸರು ಬಂತೆಂದು ಹೇಳುತ್ತಾರೆ.
ಇಲ್ಲಿರುವ ಏಕಶಿಲಾ ನಾಗಲಿಂಗವಂತೂ ಇಲ್ಲಿನ ಮುಖ್ಯ ಆಕರ್ಷಣೆ. ಇಷ್ಟು ದೊಡ್ಡ ನಾಗಲಿಂಗ ಬೇರೆಲ್ಲೂ ಇಲ್ಲ.
ಇದನ್ನು ನೋಡಿ ಮುಂದುವರೆದಾಗ ಕಲ್ಯಾಣ ಮಂಟಪ ಎದುರಾಗುತ್ತದೆ, ಆದರೆ ಇದನ್ನು ನೋಡುವಾಗ ತುಂಬಾ ವ್ಯಸನವಾಗುತ್ತದೆ. ಇದೊಂದು ಅಪೂರ್ಣ ಕಟ್ಟಡ.

ಇದನ್ನು ನೋಡಿ ಮುಂದುವರೆದಾಗ ಕಲ್ಯಾಣ ಮಂಟಪ ಎದುರಾಗುತ್ತದೆ, ಆದರೆ ಇದನ್ನು ನೋಡುವಾಗ ತುಂಬಾ ವ್ಯಸನವಾಗುತ್ತದೆ. ಇದೊಂದು ಅಪೂರ್ಣ ಕಟ್ಟಡ.
ಸ್ಥಂಭಗಳು ಕೆತ್ತನೆಗಳಿಂದ ಅಲಂಕೃತವಾಗಿ ನಿಂತಿವೆ ಆದರೆ ಮೇಲ್ಚಾವಣಿ ಇಲ್ಲವೇ ಇಲ್ಲ.


ಇದನ್ನು ನೋಡುವಾಗ ವಿರುಪಣ್ಣನ ಕಥೆ ನಿಜವಿರಬೇಕು ಎನಿಸುತ್ತದೆ. ಆತನ ಅವಸಾನವಾಗಿರಬೇಕು, ಆಮೇಲೆ ಇದನ್ನು ಕೇಳುವವರಿಲ್ಲದಾಗಿರಬೇಕು. ಈ ಕಂಭ ಗಳಲ್ಲಿ ಸುಂದರ ಶಿಲ್ಪಗಳನ್ನು ಕೆತ್ತಿದ್ದಾರೆ. ಅನಂತಶಯನ, ದತ್ತಾತ್ರೇಯ, ಚತುರ್ಮುಖ ಬ್ರಹ್ಮ, ತುಂಬುರ, ನಾರದ ಮತ್ತು ರಂಭಾ ಇವರೆಲ್ಲರೂ ಶಿವ ಪಾರ್ವತಿ ಯರ ವಿವಾಹಕ್ಕೆ ಬಂದಿರುವ ಸನ್ನಿವೇಶವನ್ನು ಇಲ್ಲಿ ಕೆತ್ತಿದ್ದಾರೆ.

ಆಲ್ಲಿಂದ ಸ್ವಲ್ಪ ಕೆಳಗೆ ಇಳಿದು ಬಂದರೆ ಇನ್ನೊಂದು ಮಂಟಪ ಸಿಗುತ್ತದೆ.



ಇದನ್ನು ನೋಡುವಾಗ ವಿರುಪಣ್ಣನ ಕಥೆ ನಿಜವಿರಬೇಕು ಎನಿಸುತ್ತದೆ. ಆತನ ಅವಸಾನವಾಗಿರಬೇಕು, ಆಮೇಲೆ ಇದನ್ನು ಕೇಳುವವರಿಲ್ಲದಾಗಿರಬೇಕು. ಈ ಕಂಭ ಗಳಲ್ಲಿ ಸುಂದರ ಶಿಲ್ಪಗಳನ್ನು ಕೆತ್ತಿದ್ದಾರೆ. ಅನಂತಶಯನ, ದತ್ತಾತ್ರೇಯ, ಚತುರ್ಮುಖ ಬ್ರಹ್ಮ, ತುಂಬುರ, ನಾರದ ಮತ್ತು ರಂಭಾ ಇವರೆಲ್ಲರೂ ಶಿವ ಪಾರ್ವತಿ ಯರ ವಿವಾಹಕ್ಕೆ ಬಂದಿರುವ ಸನ್ನಿವೇಶವನ್ನು ಇಲ್ಲಿ ಕೆತ್ತಿದ್ದಾರೆ.

ಆಲ್ಲಿಂದ ಸ್ವಲ್ಪ ಕೆಳಗೆ ಇಳಿದು ಬಂದರೆ ಇನ್ನೊಂದು ಮಂಟಪ ಸಿಗುತ್ತದೆ.

ಎಲ್ಲವನ್ನೂ ನೋಡಿ ಗರ್ಭ ಗೃಹವನ್ನು ಪ್ರವೇಶಿಸಿದಾಗ ಮುಖ್ಯ ಪ್ರತಿಷ್ಠೆಯಾದ ವೀರಭದ್ರ ದೇವರ ದರ್ಶನವಾಗುತ್ತದೆ.

ನವಗ್ರಹ, ಮತ್ತು ಇತರ ದೇವರುಗಳ ಗುಡಿಯೂ ಇಲ್ಲೇ ಇದೆ. ಒಳಗಡೆ ಸಹಾ ತುಂಬಾ ಶಿಲ್ಪಗಳಿವೆ.

ನವಗ್ರಹ, ಮತ್ತು ಇತರ ದೇವರುಗಳ ಗುಡಿಯೂ ಇಲ್ಲೇ ಇದೆ. ಒಳಗಡೆ ಸಹಾ ತುಂಬಾ ಶಿಲ್ಪಗಳಿವೆ.
ದೇವಾಲಯದ ಹೊರಗಡೆ ಬಹಳ ದೊಡ್ಡದಾದ ಒಂದು ನಂದಿ ವಿಗ್ರಹವಿದ್ದು ಇದು ಅತಿ ದೊಡ್ಡ ಏಕಶಿಲಾ ನಂದಿ ಎಂದು ಹೆಸರುವಾಸಿಯಾಗಿದೆ.
ಬೆಂಗಳೂರಿನಿಂದ ಲೇಪಾಕ್ಷಿಗೆ ಬಸ್ಸು ಸೌಕರ್ಯವಿದೆ. ಒಂದು ದಿನದ ಪ್ರವಾಸಕ್ಕೆ ಉತ್ತಮವಾದ ಜಾಗ.
No comments:
Post a Comment