ನಾವು ಅದೆಷ್ಟೋ ಜಾಗಗಳನ್ನು ನೋಡಿದ್ದೇವೆ, ಆದರೆ ಮೇಕೆದಾಟು ಮಾತ್ರ ನೋಡಿಲ್ಲವಲ್ಲಾ ಎಂದು ನಮ್ಮ ಶ್ರುತಿ ಹೇಳಿದಾಗ, ಹೌದಲ್ಲಾ, ನಾವು ಇದನ್ನೇಕೆ ಮರೆತೆವು? ಎಂದುಕೊಂಡೆವು. ಆ ದಿನವೇ
ಮೇಕೆದಾಟುಗೆ ಹೋಗುವ ದಿನ ಗೊತ್ತು ಮಾಡಿದೆವು. 2011 ಸೆಪ್ಟೆಂಬರ್ ತಿಂಗಳ ಒಂದು ರವಿವಾರ ನಾವು ಆರು ಜನ ಮಾರುತಿ ಕಾರ್ ನಲ್ಲಿ ಹೊರಟೆವು. ಬೆಂಗಳೂರಿನಿಂದ
ಕನಕಪುರ ಸುಮಾರು 70 ಕಿ.ಮೀ. ಮತ್ತು ಕನಕಪುರದಿಂದ ಸಂಗಮಕ್ಕೆ 30ಕಿ.ಮೀ ದೂರವಿದೆ. ಬೆಂಗಳೂರಿಗೆ ಒಂದು ಸುತ್ತು ಹಾಕಿ ಅಂತೂ ಕನಕಪುರ
ರಸ್ತೆಗೆ ಬಂದೆವು. ಅಷ್ಟರಲ್ಲಿ ನಮ್ಮ ಮಂಜು ಅವರೂ ಮೊಬೈಲ್ ನಲ್ಲಿ ನಮ್ಮನ್ನು ಸಂಪರ್ಕಿಸಿ ನೀವು ಎಲ್ಲಿದ್ದೀರಾ
ನಾವೂ ಅಲ್ಲಿಗೇ ಬರುತಿದ್ದೇವೆ ಎಂದಾಗ ಎಲ್ಲರಿಗೂ ಖುಷಿ ಆಯಿತು. ಅವರಿಗೆ ನಾವಿದ್ದ ಲೋಕೇಶನ್ ಹೇಳಿ, ನಾವು ನಿಧಾನಕ್ಕೆ ಮುಂದೆ ಹೋಗುತ್ತಿರುತ್ತೇವೆ ನೀವು ಬಂದು ನಮ್ಮನ್ನು ಸೇರಿಕೊಳ್ಳಿ ಎಂದೆವು.
ನಾವು ಮುಂದೆ ಹೋಗಿ ಕನಕಪುರ ಸೇರಿದೆವು ಆದರೂ ಅವರ ಸುಳಿವಿಲ್ಲ.
ಕನಕಪುರದಿಂದ ಎಡಗಡೆಗೆ ಹೋಗುವ ರಸ್ತೆ ಸಂಗಮ - ಮೇಕೆದಾಟು ಸೇರುತ್ತದೆ ಎಂದು ತಿಳಿದುಕೊಂಡು ನಾವು ಮುಂದುವರಿದೆವು.
ದಾರಿಯುದ್ದಕ್ಕೂ ಏನೇನೋ ತಿಂಡಿ,
ಬಿಸ್ಕತ್ತು, ಜ್ಯೂಸ್ ಎಲ್ಲ ಸೇವಿಸುತ್ತಾ ಮಜವಾಗಿ ಮುಂದೆ ಸಾಗುತಿದ್ದೆವು. ಕಾರ್
ನ ಹಿಂದಿನ ಸೀಟ್ ನಲ್ಲಿ ನಾಲ್ಕು ಜನ ಕುಳಿತಿದ್ದುದರಿಂದ ಅವರಿಗೆ ಸ್ವಲ್ಪ ಇಕ್ಕಟ್ಟು ಆಗಿದ್ದರೂ ಪ್ರಯಾಣದ
ಉತ್ಸಾಹದಲ್ಲಿ ಅದನ್ನು ಮರೆತೇಬಿಟ್ಟಿದ್ದರು. ಇಷ್ಟು ಹೊತ್ತಾದರೂ ಮಂಜು ಅವರ ಕಾರು ಇನ್ನೂ ಬಂದಿಲ್ಲ.
ಆದರೆ ಸ್ವಲ್ಪ ಹೊತ್ತಲ್ಲಿ ಅವರ ಫೋನ್ ಬಂತು. ಅವರು ನಾವು ಬಂದ ದಾರಿ ಬಿಟ್ಟು ರಾಮನಗರ ದಾರಿಯಾಗಿ ಬರುತ್ತಿದ್ದಾರೆ
ಎಂತ ಹೇಳಿದರು. ಹಾಗಾಗಿ ನಾವು ಇನ್ನು ಸಂಗಮದಲ್ಲೇ ಜೊತೆಯಾಗೋಣ ಎಂತ ಹೇಳಿದೆವು.
ಸ್ವಲ್ಪ ದೂರ ಕ್ರಮಿಸಿದಾಗ
ಎಡಗಡೆಗೆ ಹೋಗುವ ಒಂದು ರಸ್ತೆ ಚುಂಚಿ ಫಾಲ್ಸ್ ಗೆ ಹೋಗುತ್ತದೆ. ಸರಿ ಅದನ್ನು ನೋಡಿಯೇಬಿಡೋಣ ಎಂತ ಅದರಲ್ಲಿ
ಸಾಗಿದೆವು.ಸುಮಾರು ದೂರ ಹೋದಾಗ ಯೆಲೆಗುರಿ ಹಳ್ಳಿ ಸಿಗುತ್ತದೆ. ಅದನ್ನು ದಾಟಿ ಮುಂದೆ ಹೊಗಬೇಕು. ಒಟ್ಟು
4 ಕಿ.ಮೀ . ಪ್ರಯಾಣಿಸಿದಾಗ ಒಂದು ಕಾರ್ ಪಾರ್ಕ್ ಸಿಗುತ್ತದೆ. ಕಾರು
ನಿಲ್ಲಿಸಿದ್ದೆ ತಡ,
ಒಬ್ಬಾಕೆ ಬಂದು 25 ರೂ. ಚೀಟಿ ಹರಿದೇ ಬಿಟ್ಟಳು. ಅದನ್ನು ತೆತ್ತು ಕಾರಿಂದ ಇಳಿದು
ಇಲ್ಲಿ ಫಾಲ್ಸ್ ಎಲ್ಲಿದೆ ಎಂದರೆ ಬೆಟ್ಟದ ಕೆಳಗಡೆಗೆ ಕೈ ತೋರಿದಳು. ನಾವು ನಿಧಾನವಾಗಿ ಸ್ವಲ್ಪ ಕೆಳಗೆ
ಇಳಿಯುವಷ್ಟರಲ್ಲಿ ಕೆಲವರು ಮೇಲೆ ಬರುತಿದ್ದರು. ಅವರಲ್ಲಿ ಕೇಳಿದರೆ ಇಲ್ಲಿ ಫಾಲ್ಸೂ ಇಲ್ಲ ಏನು ಇಲ್ಲ, ಅದೆಲ್ಲ ಮಳೆಗಾಲಕ್ಕೇನೆ ಕಾಣಸಿಗುವುದು ಎಂದರು. ಈವಾಗ ಅಲ್ಲಿ ಇಳಿದರೆ
ಒಂದು ಹೊಂಡದಲ್ಲಿ ಸ್ವಲ್ಪ ನೀರಿದೆ ಅಷ್ಟೇ ಎಂದರು.
ಈವಾಗ ಗೊತ್ತಾಯಿತು ಪಾರ್ಕಿಂಗ್ ಚಾರ್ಜು ತೆಗೆದುಕೊಳ್ಳಲು ಅವಳು ಯಾಕೆ ಅಷ್ಟು ಗಡಿಬಿಡಿ ಮಾಡಿದ್ದು ಎಂತ. ಅಂತೂ 8 ಕಿ.ಮೀ. ಪ್ರಯಾಣ,ಮೇಲೆ 25 ರೂ. ದಂಡ! ಸರಿಯಾಗಿ ಬೇಸ್ತು ಬಿದ್ದಿದ್ದೆವು. ಅಲ್ಲಿಂದ ಬೇಗನೇ ಹೊರಟೆವು. ಒಂದು ಅರ್ಧ ಕಿ.ಮೀ. ಬಂದಾಗ ನಮಲ್ಲಿ ಯಾರಿಗೋ ಒಂದು ಬೋರ್ಡ್ ಕಾಣಿಸಿತು. ನೋಡಿದರೆ ಅಲ್ಲಿ ಕಿರಿದಾದ ರಸ್ತೆ ಇದ್ದು, ಸಂಗಮಕ್ಕೆ ಹೋಗುತ್ತದೆ ಎಂತ ತಿಳಿದೆವು. ಪಕ್ಕದಲ್ಲೇ ಒಬ್ಬ ಕುರಿ ಮೇಯಿಸುತಿದ್ದವನೊಂದಿಗೆ, ಈ ರಸ್ತೆಯಲ್ಲಿ ಹೋದರೆ ಸಂಗಮ ತಲುಪುತ್ತೇವಾ ಎಂತ ಕೇಳಿದರೆ, ಓಯ್ತದೆ ಎಂಬ ಉತ್ತರ ಬಂತು. ಅದರಲ್ಲಿ ಸುಮಾರು 200 ಮೀಟರ್ ಹೋಗುವಷ್ಟರಲ್ಲೇ ದಾಮಾರು ಮಾರ್ಗ ಮುಗಿಯಿತು. ಮುಂದೆ ಮಣ್ಣಿನ ಹಾದಿ! ಮತ್ತೂ ಮುಂದೆ ಹೋದಾಗ ಬರೀ ಚಕ್ಕಡಿ, ಟ್ರಾಕ್ಟರ್ ಹೋಗೋ ಕಚ್ಚಾ ರಸ್ತೆ. ಅದರಲ್ಲೇ ಸಾಹಸ ಮಾಡುತ್ತಾ ಮುಂದುವರಿದೆವು.ಒಂದೆಡೆಯಲ್ಲಂತೂ ನಾನು ಕಾರ್ ಅನ್ನು ಹೊಲಕ್ಕೇ ಇಳಿಸಿ ಹೋಗಬೇಕಾಯಿತು. ರಸ್ತೆಯಲ್ಲಿ ಅಷ್ಟು ದೊಡ್ಡ ಗಾತ್ರದ ಹೊಂಡ! ಕೊನೆಗೊಮ್ಮೆ ನಾವು ಮುಖ್ಯ ರಸ್ತೆಗೆ ಬಂದು ಸೇರಿದೆವು.
ಈವಾಗ ಗೊತ್ತಾಯಿತು ಪಾರ್ಕಿಂಗ್ ಚಾರ್ಜು ತೆಗೆದುಕೊಳ್ಳಲು ಅವಳು ಯಾಕೆ ಅಷ್ಟು ಗಡಿಬಿಡಿ ಮಾಡಿದ್ದು ಎಂತ. ಅಂತೂ 8 ಕಿ.ಮೀ. ಪ್ರಯಾಣ,ಮೇಲೆ 25 ರೂ. ದಂಡ! ಸರಿಯಾಗಿ ಬೇಸ್ತು ಬಿದ್ದಿದ್ದೆವು. ಅಲ್ಲಿಂದ ಬೇಗನೇ ಹೊರಟೆವು. ಒಂದು ಅರ್ಧ ಕಿ.ಮೀ. ಬಂದಾಗ ನಮಲ್ಲಿ ಯಾರಿಗೋ ಒಂದು ಬೋರ್ಡ್ ಕಾಣಿಸಿತು. ನೋಡಿದರೆ ಅಲ್ಲಿ ಕಿರಿದಾದ ರಸ್ತೆ ಇದ್ದು, ಸಂಗಮಕ್ಕೆ ಹೋಗುತ್ತದೆ ಎಂತ ತಿಳಿದೆವು. ಪಕ್ಕದಲ್ಲೇ ಒಬ್ಬ ಕುರಿ ಮೇಯಿಸುತಿದ್ದವನೊಂದಿಗೆ, ಈ ರಸ್ತೆಯಲ್ಲಿ ಹೋದರೆ ಸಂಗಮ ತಲುಪುತ್ತೇವಾ ಎಂತ ಕೇಳಿದರೆ, ಓಯ್ತದೆ ಎಂಬ ಉತ್ತರ ಬಂತು. ಅದರಲ್ಲಿ ಸುಮಾರು 200 ಮೀಟರ್ ಹೋಗುವಷ್ಟರಲ್ಲೇ ದಾಮಾರು ಮಾರ್ಗ ಮುಗಿಯಿತು. ಮುಂದೆ ಮಣ್ಣಿನ ಹಾದಿ! ಮತ್ತೂ ಮುಂದೆ ಹೋದಾಗ ಬರೀ ಚಕ್ಕಡಿ, ಟ್ರಾಕ್ಟರ್ ಹೋಗೋ ಕಚ್ಚಾ ರಸ್ತೆ. ಅದರಲ್ಲೇ ಸಾಹಸ ಮಾಡುತ್ತಾ ಮುಂದುವರಿದೆವು.ಒಂದೆಡೆಯಲ್ಲಂತೂ ನಾನು ಕಾರ್ ಅನ್ನು ಹೊಲಕ್ಕೇ ಇಳಿಸಿ ಹೋಗಬೇಕಾಯಿತು. ರಸ್ತೆಯಲ್ಲಿ ಅಷ್ಟು ದೊಡ್ಡ ಗಾತ್ರದ ಹೊಂಡ! ಕೊನೆಗೊಮ್ಮೆ ನಾವು ಮುಖ್ಯ ರಸ್ತೆಗೆ ಬಂದು ಸೇರಿದೆವು.
ಮುಂದೆ ನಮಗೆ ಘಾಟ್ ರಸ್ತೆ ಸಿಕ್ಕಿತು. ಇಳಿಜಾರು ಹಾಗೂ ತಿರುವುಗಳು,
ಪಕ್ಕದಲ್ಲಿ ಕಾಡು. ಸುಮಾರು ದೂರ ಪ್ರಯಾಣಿಸಿ ನಾವು ಸಂಗಮಕ್ಕೆ ಬಂದು ತಲುಪಿದೆವು. ರಜಾದಿನ ಆದ್ದರಿಂದ
ಕಾರು,ಬೈಕ್ ಗಳು ತುಂಬಿದ್ದವು. ಪಾರ್ಕಿಂಗ್ ಸುಲಭದಲ್ಲಿ ಸಿಗಲಿಲ್ಲ. ಅಂತೂ ಒಂದು ಪಕ್ಕದಲ್ಲಿ ಕಾರ್
ನಿಲ್ಲಿಸಿ ಪಾರ್ಕಿಂಗ್ ಚಾರ್ಜ್ 50ರೂ. ಕೊಟ್ಟು ನಮ್ಮ ನಮ್ಮ ಬ್ಯಾಕ್ ಪ್ಯಾಕ್ ಏರಿಸಿಕೊಂಡು ಹೊರಡುವಷ್ಟರಲ್ಲೇ
ಮಂಜು ಅವರ ಕಾರ್ ಬಂದೇಬಿಟ್ಟಿತು. ಸರಿ ಪರಸ್ಪರ ಅನುಭವ ವಿನಿಮಯ ಮಾಡಿಕೊಂಡು ಮುಂದೆ ನಡೆದೆವು.
ಅಕ್ಕ ಪಕ್ಕದಲ್ಲಿ ಗೂಡಂಗಡಿಗಳು, ಅದೇ ಮಾಮೂಲಿ ಭಜಿ, ಬೋಂಡ,ಬಾಳೆಹಣ್ಣು,
ಸೌತೆಕಾಯಿ, ಫಾಂಟ,ಕೋಲಾ ಕಾಫಿ, ಟೀ ಎಲ್ಲ ಇದ್ದವು. ಜೋತೆಗೆನೇ ಫಿಶ್ ಫ್ರೈ ಸಹಾ ಧಾರಾಳವಾಗಿ ಇಟ್ಟಿದ್ದರು.
ಸಂಗಮದಲ್ಲಿ ಮೀನು ಹಿಡಿದು ಅದನ್ನೇ ಇಲ್ಲಿ ಫ್ರೈ ಮಾಡುತ್ತಾರೆ. ಇದರಿಂದ ಹೊರಡುವ ಮತ್ಸ್ಯಗಂಧವು ಕೆಲವರನ್ನು
ಅದರೆಡೆಗೆ ಆಕರ್ಷಿಸಿದರೆ, ಕೆಲವರನ್ನು ಅಲ್ಲಿಂದ ಕಾಲ್ಕೀಳುವಂತೆ
ಮಾಡುತ್ತದೆ. ಎಲ್ಲಿ ನೋಡಿದರೂ ಮೀನಿನ ಮುಳ್ಳು, ಅದಕ್ಕೆ ಎರಗುವ ಕಾಗೆಗಳು, ನಾಯಿಗಳು. ಅದನ್ನೆಲ್ಲ
ದಾಟಿ ಸಂಗಮಕ್ಕೆ ಬಂದೆವು. ಅಲ್ಲೂ ಬೇಕಾದಷ್ಟು ಕಸ ಎಸೆದಿದ್ದಾರೆ.
ನದಿಯನ್ನು ದಾಟಲು ಹರಿಗೋಲುಗಳಿವೆ. ತಲಾ 50 ರೂ. ತೆತ್ತು ನಾವೆಲ್ಲಾ ಒಂದೇ
ಹರಿಗೋಲಿನಲ್ಲಿ ಹತ್ತಿದೆವು.ಈ ಚಾರ್ಜು ಹೋಗಲು ಮತ್ತು ವಾಪಸ್ ಬರಲು ಸಹಾ ಸೇರಿದೆ. ಈ ಹರಿಗೂಲೆಂದರೆ ಬಿದಿರು ಪ್ಲಾಸ್ಟಿಕ್ ಹಾಳೆ ಗೋಣಿತಾಟು ಮೊದಲಾದವುಗಳಿಂದ
ಮಾಡಿದ ಒಂದು ಬುಟ್ಟಿಯಾಕಾರದ ದೋಣಿ. ಕಾವೇರಿ ನದಿಯ
ಪ್ರಸಿದ್ಧ ತಾಣಗಳಾದ ರಂಗನತಿಟ್ಟು, ನಿಮಿಷಾಂಬಾ, ತಲಕಾಡು ಮೊದಲಾದ ಕಡೆಗಳಲ್ಲೆಲ್ಲಾ ಈ ಹರಿಗೊಲನ್ನೇ
ಕಾಣಬಹುದು. ಆ ದೊಡ್ಡ ಬುಟ್ಟಿಯಲ್ಲಿ ನಾವು 10ಜನರೂ ಹಿಡಿಸಿದೆವು.
ಇಲ್ಲಿ ಕಾವೇರಿ ನದಿ ಮತ್ತು ಅರ್ಕಾವತಿ ನದಿಗಳು ಒಟ್ಟು ಸೇರುವ ಸಂಗಮ ಸ್ಥಳ. ನದಿ ಸುಮಾರು 150 ಮೀಟರ್ ಅಗಲವಿದೆ. ಹರಿಗೋಲು ನಿಧಾನವಾಗಿ ಮುಂದೆ ಸಾಗಿ ಮಧ್ಯ ನೀರಿನಲ್ಲೇ ನಿಂತುಬಿಟ್ಟಿತು. ಅಲ್ಲಿಯವರೆಗೆ ಮಾತ್ರ ಅದು ಹೋಗುವುದಂತೆ. ಯಾಕೆಂದರೆ ಕೆಳಗಡೆ ಹೂಳು ತುಂಬಿದ್ದರಿಂದ ಅದರ ತಳಭಾಗವು ಅದಕ್ಕೆ ತಗಲಿ ಮುಂದುವರಿಯಲು ಆಗುವುದಿಲ್ಲ ಎಂದ ನಮ್ಮ ಅಂಬಿಗ . ಒಬ್ಬೊಬ್ಬರಾಗಿ ತಮ್ಮ ಬಟ್ಟೆಯನ್ನು, ಪ್ಯಾಂಟ್ ಅನ್ನು ಮೊಳಕಾಲಿನವರೆಗೆ ಮಡಚಿ ನೀರಿಗೆ ಇಳಿದು ನದಿ ದಾಟಿದೆವು. ನಿಜವಾಗಿ ಇದೇ ಒಳ್ಳೆಯ ಮಜಾ ಆಯಿತು.
ಇಲ್ಲಿ ಕಾವೇರಿ ನದಿ ಮತ್ತು ಅರ್ಕಾವತಿ ನದಿಗಳು ಒಟ್ಟು ಸೇರುವ ಸಂಗಮ ಸ್ಥಳ. ನದಿ ಸುಮಾರು 150 ಮೀಟರ್ ಅಗಲವಿದೆ. ಹರಿಗೋಲು ನಿಧಾನವಾಗಿ ಮುಂದೆ ಸಾಗಿ ಮಧ್ಯ ನೀರಿನಲ್ಲೇ ನಿಂತುಬಿಟ್ಟಿತು. ಅಲ್ಲಿಯವರೆಗೆ ಮಾತ್ರ ಅದು ಹೋಗುವುದಂತೆ. ಯಾಕೆಂದರೆ ಕೆಳಗಡೆ ಹೂಳು ತುಂಬಿದ್ದರಿಂದ ಅದರ ತಳಭಾಗವು ಅದಕ್ಕೆ ತಗಲಿ ಮುಂದುವರಿಯಲು ಆಗುವುದಿಲ್ಲ ಎಂದ ನಮ್ಮ ಅಂಬಿಗ . ಒಬ್ಬೊಬ್ಬರಾಗಿ ತಮ್ಮ ಬಟ್ಟೆಯನ್ನು, ಪ್ಯಾಂಟ್ ಅನ್ನು ಮೊಳಕಾಲಿನವರೆಗೆ ಮಡಚಿ ನೀರಿಗೆ ಇಳಿದು ನದಿ ದಾಟಿದೆವು. ನಿಜವಾಗಿ ಇದೇ ಒಳ್ಳೆಯ ಮಜಾ ಆಯಿತು.
ದಡ ಸೇರಿ ಒಂದು ಕಡೆ ಕುಳಿತು ತಿಂಡಿ ತಿನ್ನ ಬೇಕು ಎಂತ ಒಳ್ಳೆಯ
ಪ್ರಶಸ್ಥ ಜಾಗ ಹುಡುಕಿದೆವು. ಎಲ್ಲಿ ನೋಡಿದರೂ ಕಸ, ಪ್ಲಾಸ್ಟಿಕ್ ಚೀಲಗಳು, ನೀರಿನ ಬಾಟಲಿಗಳು, ಪೇಪರ್
ಪ್ಲೇಟ್ ಗಳು, ಇನ್ನಿತರ ಆಹಾರ ತ್ಯಾಜ್ಯ ಗಳು. ಇಷ್ಟೆಲ್ಲಾ ಕಸ ಇದ್ದರೂ ಒಂದೇ ಒಂದು ಕಸದ ಡಬ್ಬಿ ಇಲ್ಲ!
ನದಿಯ ದಂಡೆಯಲ್ಲಿ ಕಲ್ಲು ಬಂಡೆಗಳಿವೆ ಅಲ್ಲಿಯಾದರೂ ಕುಳಿತುಕೊಳ್ಳೋಣವೆಂದರೆ ಅಲ್ಲೂ ವಾಸನೆ, ಗಲೀಜು,
ತ್ಯಜಿಸಿರುವ ಬಟ್ಟೆಗಳು, ಒಳ ಉಡುಪುಗಳು. ಅಲ್ಲೊಂದು ಮಂಟಪ ಕಾಣಿಸಿತು. ಅಲ್ಲಿಗೆ ಹೋದರೆ ಅಲ್ಲೂ ಇದೇ
ವೈಭವ.
ಸಾಲದ್ದಕ್ಕೆ ಕೋತಿಗಳ ಕಾಟ. ಸುತ್ತಲೂ ಕಾಡು ಇದ್ದುದರಿಂದ ಕೋತಿಗಳು ಸಹಜ ಬಿಡಿ. ಒಂದು ಘಡವ ಬಂದು ನಮ್ಮ ಚೀಲದಿಂದ ಕೈ ಹಾಕಿ ಒಂದು ಸೇಬು ಹಣ್ಣನ್ನು ಎಗರಿಸಿಯೇಬಿಟ್ಟಿತು.ಎಷ್ಟೆಂದರೂ ನಮ್ಮ ಪೂರ್ವಜನಲ್ಲವೇ ಅದರ ಪಾಲು ದಕ್ಕಿಸಿಕೊಂಡಿತು ಎಂದುಕೊಂಡೆವು. ನಾವು ಹೊಟ್ಟೆ ತುಂಬಿಸಿಕೊಂಡೆವು.
ಸಾಲದ್ದಕ್ಕೆ ಕೋತಿಗಳ ಕಾಟ. ಸುತ್ತಲೂ ಕಾಡು ಇದ್ದುದರಿಂದ ಕೋತಿಗಳು ಸಹಜ ಬಿಡಿ. ಒಂದು ಘಡವ ಬಂದು ನಮ್ಮ ಚೀಲದಿಂದ ಕೈ ಹಾಕಿ ಒಂದು ಸೇಬು ಹಣ್ಣನ್ನು ಎಗರಿಸಿಯೇಬಿಟ್ಟಿತು.ಎಷ್ಟೆಂದರೂ ನಮ್ಮ ಪೂರ್ವಜನಲ್ಲವೇ ಅದರ ಪಾಲು ದಕ್ಕಿಸಿಕೊಂಡಿತು ಎಂದುಕೊಂಡೆವು. ನಾವು ಹೊಟ್ಟೆ ತುಂಬಿಸಿಕೊಂಡೆವು.
ಇಲ್ಲಿಂದ ಮೇಕೆದಾಟುಗೆ ಸುಮಾರು 4ಕಿ.ಮೀ. ಯಷ್ಟು ಕಾಡು ದಾರಿ.
ಕಾಡು ಅಷ್ಟೊಂದು ದಟ್ಟವಾಗಿ ಇಲ್ಲವಾದರೂ ನೋಡಲು ಸುಂದರವಾಗಿತ್ತು. ಬಲ ಪಕ್ಕದಲ್ಲಿ ಕಾವೇರಿ ರಭಸದಿಂದ
ಹರಿಯುತ್ತಿದ್ದಾಳೆ. ಅಲ್ಲೆಲ್ಲಾ ನೀರಿಗೆ ಇಳಿಯುವುದು ಬಹಳ ಅಪಾಯಕಾರಿ. ಮೇಕೆದಾಟು ಗೆ ನಡೆದೇ ಹೋಗಬಹುದು.
ಇಲ್ಲವಾದರೆ ಆಗಾಗ ಅಲ್ಲಿಗೇನೇ ಬರುವ ಬಸ್ ನಲ್ಲಿ ಹೋಗಬಹುದು. ನಾವು ಬಸ್ ಹತ್ತಿದೆವು. ಎರಡೂ ಕಡೆಯ
ಚಾರ್ಜು ಒಟ್ಟು 40 ರೂ.
ಇಲ್ಲಿ ಬಸ್ ನ ಟಾಪ್ ನ ಮೇಲೆಲ್ಲಾ ಕುಳಿತು ಹೋಗುತ್ತಾರೆ. ಬಸ್ ಮುಂದೆ ಸಾಗಿ ಮೇಕೆದಾಟು ಗೆ ಬಂತು
. ಅಲ್ಲಿ ಇಳಿದು ಕೆಲ ಹೆಜ್ಜೆ ಹಾಕಿದರೆ ಮೆಕೆದಾಟುವಿನ ರುದ್ರ ರಮಣೀಯ ದೃಶ್ಯ ಕಾಣುತ್ತದೆ. ಅಲ್ಲಿ
ನಾವು ಕಡಿದಾದ ಬಂಡೆಯ ಪಕ್ಕದಲ್ಲಿ ಜಾಗರೂಕರಾಗಿ ಕೆಳಗೆ ಇಳಿಯಬೇಕು.
ಕೆಳಗಿನಿಂದ ಮೇಲೇರುವವರಿಗೂ ಕಷ್ಟದಲ್ಲಿ ಜಾಗಬಿಡಬೇಕು. ಕೆಳಗೆ ಇಳಿದಾಕ್ಷಣ ಸ್ವಲ್ಪ ಜಾಗ ಮರಳು, ಆಮೇಲೆ ಬಂಡೆ, ಇದರ ಮೇಲೆ ಹತ್ತುವುದು ಕಷ್ಟವೇನಿಲ್ಲ. ಮುಂದೆ ಹೋದರೆ ಅದೇ ಬಂಡೆ ಕಡಿದಾಗಿ ಸುಮಾರು 60ಅಡಿ ಆಳದಲ್ಲಿ ಕಾವೇರಿ ಹರಿಯುತಿದ್ದಾಳೆ. ಆವಾಗಿನ ರೂಪವೇ ಬೇರೆ ಈಗಿನ ರೌದ್ರ ರೂಪವೇ ಬೇರೆ. ಅಬ್ಭಾ ಏನು ರಭಸ!
ನಾವು ನಿಂತಲ್ಲಿಂದ ಎದುರುಗಡೆ ಕಡಿದಾದ ಗೋಡೆಯಂತೆ ಬಂಡೆ ಇದೆ. ಸುಮಾರು 150 ಅಡಿ ಎತ್ತರವಿದೆ. ಈ ಕಡೆಯಿಂದ ಆ ಬದಿಗೆ ಸುಮಾರು 100 ಅಡಿಗಳ ಫಾಸಲೆಯಿದೆ. ಮೇಕೆ ಅದ್ಹೇಗೆ ಅಷ್ಟು ದೂರಕ್ಕೆ ನೆಗೆಯಿತೋ ಊಹಿಸಲಾಗುತ್ತಿಲ್ಲ. ಕಲ್ಪನೆಯಿರಬಹುದು. ಅಲ್ಲೊಂದು ಕಡೆ ಬಂಡೆಯು ಕಾರ್ನೀಸಿನಂತೆ ಸುಮಾರು 7-8ಅಡಿ ಮುಂದಕ್ಕೆ ಚಾಚಿದೆ. ಬಹುಷಃ ಇದೇ ಕಾರ್ನೀಸ್ ಒಂದಾನೊಂದು ಕಾಲದಲ್ಲಿ ಇನ್ನು ಹೆಚ್ಚು ಉದ್ದಕ್ಕೆ ಚಾಚಿರಬಹುದಾದ ಸಾಧ್ಯತೆ ಇದ್ದಿರಬಹುದು. ಅಲ್ಲಿಂದ ಮೇಕೆ ಜಿಗಿದಿರಬಹುದು. ಕ್ರಮೇಣ ಕಾಲನ ಹೊಡೆತಕ್ಕೆ ಬಂಡೆ ಕುಸಿದಿರಲೂಬಹುದು. ಇದೆಲ್ಲ, ಇಲ್ಲಿಗೆ ಬರುವ ಪ್ರತಿಯೊಬ್ಬ ಪ್ರವಾಸಿಯೂ ಖಂಡಿತವಾಗಿಯೂ ಯೋಚಿಸುತ್ತಿರಬಹುದಾದ ವಿಷಯ.
ಆದರೆ ಒಂದಂತೂ ನಿಜ ಇಲ್ಲಿ ಜಿಗಿದದ್ದು ಮೆಕೆಯೇ ಸರಿ, ಹಸು, ಜಿಂಕೆ, ಕುರಿ, ಹುಲಿ,ತೋಳ ಅಥವಾ ಇನ್ನಿತರ ಯಾವುದೇ ಪ್ರಾಣಿಯಲ್ಲ. ಯಾಕೆಂದರೆ ಇದು ಮೇಕೆದಾಟು!!
ಕೆಳಗಿನಿಂದ ಮೇಲೇರುವವರಿಗೂ ಕಷ್ಟದಲ್ಲಿ ಜಾಗಬಿಡಬೇಕು. ಕೆಳಗೆ ಇಳಿದಾಕ್ಷಣ ಸ್ವಲ್ಪ ಜಾಗ ಮರಳು, ಆಮೇಲೆ ಬಂಡೆ, ಇದರ ಮೇಲೆ ಹತ್ತುವುದು ಕಷ್ಟವೇನಿಲ್ಲ. ಮುಂದೆ ಹೋದರೆ ಅದೇ ಬಂಡೆ ಕಡಿದಾಗಿ ಸುಮಾರು 60ಅಡಿ ಆಳದಲ್ಲಿ ಕಾವೇರಿ ಹರಿಯುತಿದ್ದಾಳೆ. ಆವಾಗಿನ ರೂಪವೇ ಬೇರೆ ಈಗಿನ ರೌದ್ರ ರೂಪವೇ ಬೇರೆ. ಅಬ್ಭಾ ಏನು ರಭಸ!
ನಾವು ನಿಂತಲ್ಲಿಂದ ಎದುರುಗಡೆ ಕಡಿದಾದ ಗೋಡೆಯಂತೆ ಬಂಡೆ ಇದೆ. ಸುಮಾರು 150 ಅಡಿ ಎತ್ತರವಿದೆ. ಈ ಕಡೆಯಿಂದ ಆ ಬದಿಗೆ ಸುಮಾರು 100 ಅಡಿಗಳ ಫಾಸಲೆಯಿದೆ. ಮೇಕೆ ಅದ್ಹೇಗೆ ಅಷ್ಟು ದೂರಕ್ಕೆ ನೆಗೆಯಿತೋ ಊಹಿಸಲಾಗುತ್ತಿಲ್ಲ. ಕಲ್ಪನೆಯಿರಬಹುದು. ಅಲ್ಲೊಂದು ಕಡೆ ಬಂಡೆಯು ಕಾರ್ನೀಸಿನಂತೆ ಸುಮಾರು 7-8ಅಡಿ ಮುಂದಕ್ಕೆ ಚಾಚಿದೆ. ಬಹುಷಃ ಇದೇ ಕಾರ್ನೀಸ್ ಒಂದಾನೊಂದು ಕಾಲದಲ್ಲಿ ಇನ್ನು ಹೆಚ್ಚು ಉದ್ದಕ್ಕೆ ಚಾಚಿರಬಹುದಾದ ಸಾಧ್ಯತೆ ಇದ್ದಿರಬಹುದು. ಅಲ್ಲಿಂದ ಮೇಕೆ ಜಿಗಿದಿರಬಹುದು. ಕ್ರಮೇಣ ಕಾಲನ ಹೊಡೆತಕ್ಕೆ ಬಂಡೆ ಕುಸಿದಿರಲೂಬಹುದು. ಇದೆಲ್ಲ, ಇಲ್ಲಿಗೆ ಬರುವ ಪ್ರತಿಯೊಬ್ಬ ಪ್ರವಾಸಿಯೂ ಖಂಡಿತವಾಗಿಯೂ ಯೋಚಿಸುತ್ತಿರಬಹುದಾದ ವಿಷಯ.
ಆದರೆ ಒಂದಂತೂ ನಿಜ ಇಲ್ಲಿ ಜಿಗಿದದ್ದು ಮೆಕೆಯೇ ಸರಿ, ಹಸು, ಜಿಂಕೆ, ಕುರಿ, ಹುಲಿ,ತೋಳ ಅಥವಾ ಇನ್ನಿತರ ಯಾವುದೇ ಪ್ರಾಣಿಯಲ್ಲ. ಯಾಕೆಂದರೆ ಇದು ಮೇಕೆದಾಟು!!
ಇಲ್ಲಿ ಸೋಜಿಗವೆಂದರೆ ನಾವು ನಿಂತಿರುವ ಬಂಡೆಯಲ್ಲೇ ಒಂದು ದೊಡ್ಡ
ಭಾವಿಯಾಕಾರದ ಹೊಂಡವಿದೆ. ಇದು ಸುಮಾರು 20 ಅಡಿ ಆಳವಿದ್ದು ತಳ ಭಾಗದಲ್ಲಿ ನೀರು ಒಳ ಬರುವಂತೆ ಒಂದು ಬಾಯಿ
ಇದೆ. ಇದು ನಿಸರ್ಗ ನಿರ್ಮಿತ.
ನೀರು ಹರಿವಲ್ಲಿ, ಎದುರುಗಡೆ ಬಂಡೆಯಲ್ಲಿ ಎಲ್ಲ ನೀರಿನ ಹರಿಯುವಿಕೆಯಿಂದಾಗಿ ಸವಕಳಿಯಾಗಿ ಚಿತ್ರ ವಿಚಿತ್ರ ಆಕೃತಿ ಗಳು, ಗವಿಗಳು. ಕೊರಕಲುಗಳು ಉಂಟಾಗಿವೆ. ಆದರೆ ಇಲ್ಲಿ ನೀರಿಗೆ ಇಳಿಯಲು ದಾರಿಯಿಲ್ಲ. ಸಾಹಸ ಮಾಡಿ ಇಳಿಯಬಹುದಾದರೂ ಬಹಳ ಅಪಾಯಕಾರಿ. ನೀರಲ್ಲಿ ಕೊಚ್ಚಿ ಹೋದರೆ ಆಮೇಲೆ ಶವಕ್ಕಾಗಿ ತಮಿಳುನಾಡಿಗೆ ಹೋಗಬೇಕಾಗಬಹುದು.
ನೀರು ಹರಿವಲ್ಲಿ, ಎದುರುಗಡೆ ಬಂಡೆಯಲ್ಲಿ ಎಲ್ಲ ನೀರಿನ ಹರಿಯುವಿಕೆಯಿಂದಾಗಿ ಸವಕಳಿಯಾಗಿ ಚಿತ್ರ ವಿಚಿತ್ರ ಆಕೃತಿ ಗಳು, ಗವಿಗಳು. ಕೊರಕಲುಗಳು ಉಂಟಾಗಿವೆ. ಆದರೆ ಇಲ್ಲಿ ನೀರಿಗೆ ಇಳಿಯಲು ದಾರಿಯಿಲ್ಲ. ಸಾಹಸ ಮಾಡಿ ಇಳಿಯಬಹುದಾದರೂ ಬಹಳ ಅಪಾಯಕಾರಿ. ನೀರಲ್ಲಿ ಕೊಚ್ಚಿ ಹೋದರೆ ಆಮೇಲೆ ಶವಕ್ಕಾಗಿ ತಮಿಳುನಾಡಿಗೆ ಹೋಗಬೇಕಾಗಬಹುದು.
ಇಲ್ಲಿನ ಬಂಡೆಯ ಮೇಲೆ ಸಹಾ ತುಂಬಾ ಎಚ್ಚರಿಕೆ ಬೇಕು. ಅದರಲ್ಲೂ
ಹೈ ಹೀಲ್ಡ್ ಚಪ್ಪಲ್ ಧರಿಸಿರುವ ಹೆಮ್ಮಕ್ಕಳು. ನುಣುಪಾದ ಬಂಡೆ ಅಷ್ಟು ಜಾರುತ್ತದೆ, ಇಲ್ಲಿ ಕೂಡ ಮೀನಿನ ಮುಳ್ಳು, ಬೀರು ಬಾಟಲಿ ಒಡೆದು ತಮ್ಮ
ಸಂಸ್ಕೃತಿ ಮೆರೆದಿದ್ದಾರೆ. ನಾವು ತುಂಬಾ ಹೊತ್ತು ಇಲ್ಲಿದ್ದು ಫೋಟೋ ಹಿಡಿದು ನಂತರ ಮೇಲ್ಗಡೆ ಬಂದೆವು.
ಬಸ್ ರೆಡಿ ಇತ್ತು. ಸಂಗಮಕ್ಕೆ ಬಂದು ಅಲ್ಲಿ ನದಿಯಲ್ಲಿ ಸ್ನಾನ ಮಾಡಿ ಖುಷಿ ಪಟ್ಟೆವು. ಇಲ್ಲಿ ಬಹಳ ಎಚ್ಚರವಿರಬೇಕು. ಎರಡು ನದಿಗಳ ಸಂಗಮವಾದ್ದರಿಂದ ನೀರಿನಲ್ಲಿ ಸುಳಿಗಳು ಸಹಜ. ಇತ್ತೀಚೆಗೆ ಒಂದೇ ಕುಟುಂಬದ 4 ಜನ ನೀರು ಪಾಲು ಆದದ್ದು ಇಲ್ಲೇ. ನಂತರ ಹರಿಗೋಲು ಪಯಣ, ಅಲ್ಲಿ ಬೇರೇನೂ ನೋಡಲು ಇಲ್ಲವಾದ್ದರಿಂದ ಬೇಗನೇ ಹೊರಟೆವು.
ಬರುತ್ತಾ ದಾರಿಯಲ್ಲಿ ಪಿರಾಮಿಡ್ ವ್ಯಾಲಿ ಸಿಗುತ್ತದೆ. ಅಲ್ಲಿಗೆ ಭೇಟಿ ಕೊಟ್ಟೆವು. ಬಹಳ ಚೆನ್ನಾಗಿರುವ ಜಾಗ. ಸುತ್ತಲೂ ಹೂದೋಟ, ಪ್ರಶಾಂತ ವಾತಾವರಣ, ಮಧ್ಯದಲ್ಲಿ ಬೃಹದಾಕಾರದ ಪಿರಮಿಡ್ ನಿರ್ಮಿಸಿದ್ದಾರೆ. ಅದರ ಒಳಗಡೆ ಕುಳಿತು ಧ್ಯಾನ ಮಾಡಬಹುದು. ಅಲ್ಲಿ ಏನೋ ಒಂದು ವಿಚಿತ್ರ ಅನುಭವವಾಗುತ್ತದೆ. ಅಲ್ಲಿಂದ ಹೊರಟು ರಾತ್ರಿ ಬೆಂಗಳೂರಿಗೆ ಬಂದೆವು.
ಬಸ್ ರೆಡಿ ಇತ್ತು. ಸಂಗಮಕ್ಕೆ ಬಂದು ಅಲ್ಲಿ ನದಿಯಲ್ಲಿ ಸ್ನಾನ ಮಾಡಿ ಖುಷಿ ಪಟ್ಟೆವು. ಇಲ್ಲಿ ಬಹಳ ಎಚ್ಚರವಿರಬೇಕು. ಎರಡು ನದಿಗಳ ಸಂಗಮವಾದ್ದರಿಂದ ನೀರಿನಲ್ಲಿ ಸುಳಿಗಳು ಸಹಜ. ಇತ್ತೀಚೆಗೆ ಒಂದೇ ಕುಟುಂಬದ 4 ಜನ ನೀರು ಪಾಲು ಆದದ್ದು ಇಲ್ಲೇ. ನಂತರ ಹರಿಗೋಲು ಪಯಣ, ಅಲ್ಲಿ ಬೇರೇನೂ ನೋಡಲು ಇಲ್ಲವಾದ್ದರಿಂದ ಬೇಗನೇ ಹೊರಟೆವು.
ಬರುತ್ತಾ ದಾರಿಯಲ್ಲಿ ಪಿರಾಮಿಡ್ ವ್ಯಾಲಿ ಸಿಗುತ್ತದೆ. ಅಲ್ಲಿಗೆ ಭೇಟಿ ಕೊಟ್ಟೆವು. ಬಹಳ ಚೆನ್ನಾಗಿರುವ ಜಾಗ. ಸುತ್ತಲೂ ಹೂದೋಟ, ಪ್ರಶಾಂತ ವಾತಾವರಣ, ಮಧ್ಯದಲ್ಲಿ ಬೃಹದಾಕಾರದ ಪಿರಮಿಡ್ ನಿರ್ಮಿಸಿದ್ದಾರೆ. ಅದರ ಒಳಗಡೆ ಕುಳಿತು ಧ್ಯಾನ ಮಾಡಬಹುದು. ಅಲ್ಲಿ ಏನೋ ಒಂದು ವಿಚಿತ್ರ ಅನುಭವವಾಗುತ್ತದೆ. ಅಲ್ಲಿಂದ ಹೊರಟು ರಾತ್ರಿ ಬೆಂಗಳೂರಿಗೆ ಬಂದೆವು.